ಮಂಡ್ಯ: ನುಡಿದಂತೆ ನಡೆದಿದ್ದೇವೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಮತಪಡೆದು ಎಸ್ಸಿಎಸ್ಪಿ/ಟಿಎಸ್ಪಿಯ 25 ಸಾವಿರ ಕೋಟಿ ರೂ.ಗಳನ್ನು ಗ್ಯಾರೆಂಟಿ ಯೋಜನೆಗೆ ಬಳಸಿದ್ದು, ಮದ್ದೂರಲ್ಲಿ ಬೃಹತ್ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ.
ಎಸ್ಸಿಎಸ್ಪಿ/ಟಿಎಸ್ಪಿಯ ಉಪ ಕಾಯ್ದೆ 7ಡಿ ರದ್ದುಗೊಳಿಸಿ 7 ಸಿ ಮೂಲಕ ಎಸ್ಸಿಎಸ್ಪಿ/ಟಿಎಸ್ಪಿಯ 25 ಸಾವಿರ ಕೋಟಿ ಹಣವನ್ನು ಹಿಂಪಡೆದು ಗ್ಯಾರೆಂಟಿ ಯೋಜನೆಗೆ ಬಳಸಿದ್ದು, ಮತ್ತು ಪರಿಶಿಷ್ಠ ಕಲ್ಯಾಣ ನಿಧಿಗೆ ವಾಪಸ್ ನೀಡಬೇಕು, ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಿ, ದಲಿತರ ಭೂಮಿ ರಕ್ಷಣೆಗೆ ಕ್ರಮ ವಹಿಸಬೇಕು, ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು, ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಸರ್ಕಾರಿ ಹುದ್ದೆ ಪಡೆದವರನ್ನು ವಜಾ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು, ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಜಾರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಟಿ.ಡಿ.ಬಸವರಾಜು, ಡಿ.ಕೆ.ಅಂಕಯ್ಯ, ಮೂರ್ತಿ, ಎಂ.ಶಿವು, ವೆಂಕಟಗಿರಿ, ಕೆಂಪಣ್ಣ, ಮುರುಗನ್ ಇದ್ದರು.
ಕಪ್ಪುಬಾವುಟ ತೋರುವ ಸಂಧರ್ಭ ಇಲ್ಲ:ಮದ್ದೂರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳು ತಾಲೋಕಿನ ಅಭಿವೃದ್ದಿಗೆ ನೂರಾರು ಕೋಟಿ ಅನುದಾನ ನೀಡಿದ್ದು ಯಾರೊಬ್ಬರು ಕಪ್ಪು ಬಾವುಟ ತೋರುವ ಪ್ರಶ್ನೆಯೆ ಇಲ್ಲವೆಂದು ಶಾಸಕ ಕದಲೂರು ಉದಯ್ ಮದ್ದೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ತಿಯಸಿದ್ದಾರೆ.