Saturday, October 18, 2025
spot_img

ಮಂಡ್ಯ:ಪ್ರತಿ ಮನೆಯು ಸ್ವದೇಶಿ.ಮನೆ ಮನೆಯೂ ಸ್ವದೇಶಿ ಅಭಿಯಾನ ಡಾ.ಇಂದ್ರೇಶ್ ಘೋಷಣೆ

ಡಿಸೆಂಬರ್ ೨೫ರ ವರೆಗೆ ಆತ್ಮ ನಿರ್ಭರ ಭಾರತ-ಸಂಕಲ್ಪ ಅಭಿಯಾನ-ಎನ್.ಎಸ್.ಇಂದ್ರೇಶ್

ಮಂಡ್ಯ: ಪ್ರತೀ ಮನೆಯೂ ಸ್ವದೇಶಿ. ಮನೆ ಮನೆಯೂ ಸ್ವದೇಶಿ ಎಂಬ ಘೋಷಣೆಯೊಂದಿಗೆ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಕೋನದೊಂದಿಗೆ ಸೆಪ್ಟೆಂಬರ್ -೨೫ ರಂದು ಉದ್ಘಾಟನೆಯಾಗಿ ನಡೆಯುತ್ತಿರುವ ಅಭಿಯಾನ ಡಿಸೆಂಬರ್-೨೫ ರವರೆಗೂ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಇಂದ್ರೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೀಪಾವಳಿ ದಿನದಿಂದ ಈ ಸ್ವದೇಶಿ ಅಭಿಯಾನದ ಬಗ್ಗೆ ಜನಜಾಗೃತಿ ಮೂಡಿಸಿ, ಪ್ರತಿಯೊಬ್ಬ ಭಾರತೀಯನಿಗೂ ಆತ್ಮನಿರ್ಭರ ಭಾರತದ ಸಂದೇಶ ತಲುಪಿಸಿ, ರಾಷ್ಟ್ರೀಯ ಚಿಂತನೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡುವುದಾಗಿದೆ.ಇದರ ಅಂಗವಾಗಿ
ರಾಷ್ಟ್ರೀಯ,ರಾಜ್ಯ,ಜಿಲ್ಲಾ,ಮಂಡಲ ಮಟ್ಟದಲ್ಲಿ ಕಾರ್ಯಾಗಾರಗಳು,”ಹರ್‌ಫರ್ ಸ್ವದೇಶಿ ಘರ್‌ಘರ್ ಸ್ವದೇಶಿ” ಎಂಬ ಘೋಷವಾಕ್ಯ ಹೆಸರಿನಡಿ ಪ್ರತಿಯೊಬ್ಬ ನಾಗರಿಕನನ್ನೂ ಜಾಗೃತಗೊಳಿಸಲಾಗುವುದು.

ಇಡೀ ದೇಶದಲ್ಲಿ “ವೋಕಲ್ ಫಾರ್ ಲೋಕಲ್” ಎಂಬ ಸಂದೇಶ ಹರಡುವ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವುದರ ಮೂಲಕ ರಾಷ್ಟ್ರದ ಆರ್ಥಿಕ ಸ್ಥಿತಿ ಮತ್ತು ಸಾಂಸ್ಕೃತಿಕತೆಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದರು.
ಆತ್ಮನಿರ್ಭರ ಭಾರತ ಭಾಷಣ ಸ್ಪರ್ಧೆ, ಕಾಲೇಜು ಮಟ್ಟದ ಸ್ವದೇಶಿ ಸಂಕಲ್ಪ ಸಮ್ಮೇಳನಗಳು ಆತ್ಮ ನಿರ್ಭರ ಭಾರತ ರಥಯಾತ್ರೆ ಮತ್ತು ಪಾದಯಾತ್ರೆ ಸ್ವದೇಶಿ ಮೇಳಗಳು, ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು

ಸ್ವದೇಶಿ ಎನ್ನುವುದು ನಮ್ಮ ಜೀವನದ ಭಾಗವಾಗಬೇಕು. ನಮ್ಮ ದೇಶದಲ್ಲಿ ತಯಾರಾದ “ಮೇಡ್ ಇನ್ ಇಂಡಿಯಾ” ವಸ್ತುಗಳು “ಮೇಕ್ ಇನ್ ಇಂಡಿಯಾ” ವಸ್ತುಗಳನ್ನು ಮಾತ್ರ ಕೊಂಡುಕೊಳ್ಳುವುದರ ಬಗ್ಗೆ ಸ್ವದೇಶಿ ಜಾಗೃತಿಯನ್ನು ನಮ್ಮ ಕಾರ್ಯಕರ್ತರು ಈ ಅಭಿಯಾನದಲ್ಲಿ ಮಾಡುತ್ತಾರೆ ಎಂದರು
ಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿವೇಕ್, ವಕ್ತಾರ ಸಿ.ಟಿ.ಮಂಜುನಾಥ್,ಮಾಧ್ಯಮ ಸಂಚಾಲಕ ನಾಗಾನಂದ್,ಕಚೇರಿ ಕಾರ್ಯದರ್ಶಿ ಚಂದ್ರು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!