Wednesday, December 17, 2025
spot_img

ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ:ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಲು ಕನ್ನಡ ಸಂಘಟನೆಗಳ ಆಗ್ರಹ

ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ: ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಿ

ಮಂಡ್ಯ ನಗರದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ. ಶಾಸಕ ರವಿಕುಮಾರ್ ಸಕರಾತ್ಮಕ ನಡೆ ಇಟ್ಟಿರುವುದನ್ನು ಸ್ವಾಗತಿಸುತ್ತೇವೆ ಎಂದು ಕನ್ನಡಪರ ಸಂಘಟನೆಗಳು ತಿಳಿಸಿವೆ.

ನಗರದ ಪತ್ರಿಕಾಭವನದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಜಂಟೀ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ.ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾಕೇರ್ ನಿರ್ಮಾಣಕ್ಕೆ ವಿಶಾಲ ಜಮೀನು ಅಗತ್ಯವಿದ್ದು ಇದಕ್ಕಾಗಿ ಮೆಡಿಕಲ್ ಕಾಲೇಜಿಗೆ ಸೇರಿದ 20 ಎಕರೆ ಒತ್ತುವರಿ ತೆರವುಗೊಳಿಸಲು ಎರಡು ಸರ್ಕಾರಗಳು ಅಗತ್ಯ ರಾಜಕೀಯ ಇಚ್ಚಾಶಕ್ತಿ ತೋರಬೇಕಿದೆ.

ಅಗತ್ಯ ನ್ಯಾಯಾಂಗ ಪ್ರಕ್ರಿಯೆ ನಡೆಸಿ ಒತ್ತುವರಿ ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.ಇದರಿಂದಾಗಿ ಒಂದು ಮೆಡಿಕಲ್ ಕಾಲೇಜಿಗೆ ಇರಬೇಕಾದ ಶೈಕ್ಷಣಿಕ ವಾತವರಣ ಇಲ್ಲವಾಗಿದೆ. ವಿದ್ಯಾರ್ಥಿಗಳು ಕಾಲೇಜು ಬಿಟ್ಟರೆ ಕೊಠಡಿ ಸೇರುವಂತಹ.ಸಾರ್ವಜನಿಕರು ಅವರು ಸಹಾಯಕರು ನಿಲ್ಲಲು ಆಗದಂತ ಇಕ್ಕಟ್ಟಾದ ವಾತವರಣದಲ್ಲಿ ಮೆಡಿಕಲ್ ಕಾಲೇಜನ್ನು ನಿರ್ವಹಿಸಲಾಗುತ್ತಿದೆ.ಇದೇ ಕಾರಣಕ್ಕೆ ಮಂಡ್ಯ ಮೆಡಿಕಲ್ ಕಾಲೇಜಿಗೆ ಹೆಚ್ಚುವರಿಯಾಗಿ ಲಭ್ಯವಾಗಬೇಕಿದ್ದ 50 ವೈದ್ಯಕೀಯ ಸೀಟುಗಳು ಮಿಮ್ಸ್ ನಿಂದ ಕೈತಪ್ಪಿ ಹೋಗಿವೆ.ಇದಕ್ಕೆ ಯಾರನ್ನು ಹೊಣೆಗಾರಿಕೆ ಮಾಡಬೇಕು.ಜಿಲ್ಲಾಡಳಿತವನ್ನೆ ಇಲ್ಲವೆ ನಮ್ಮ ಜನಪ್ರತಿನಿಧಿಗಳನ್ನೆ ಎಂದು ಬೊಟ್ಟು ಮಾಡಿದರು.

ರಾಜ್ಯ ಸರ್ಕಾರ ತಮಿಳು ಕಾಲೋನಿ ನಿವಾಸಿಗಳಿಗಾಗಿ 36 ಕೋಟಿ ವೆಚ್ಚದಲ್ಲಿ 576 ಮನೆಗಳನ್ನು ನಗರ ವ್ಯಾಪ್ತಿಯೊಳಗೆ ನಿರ್ಮಿಸಿದೆ. ಇದನ್ನು ಹಂಚಿಕೆ ಮಾಡುವ ಬದಲು ತನ್ನ ಅಸಹಾಯಕತೆ ಪ್ರದರ್ಶಿಸುತ್ತಿದೆ.

ರಾಜ್ಯ ಹೈಕೋರ್ಟಿನ ದ್ವಿಸದಸ್ಯ ಪೀಠ ಒತ್ತುವರಿ ತೆರವಿಗೆ ಸ್ಪಷ್ಟ ಆದೇಶ ನೀಡಿದೆ.ಇದನ್ನು ಮನದಟ್ಟು ಮಾಡಲು ಆಡ್ವೋಕೇಟ್ ಜನರಲ್ ರನ್ನು ಈ ಪ್ರಕರಣದಲ್ಲಿ ಹಾಜರುಪಡಿಸಿ ಒತ್ತುವರಿ ತೆರವಿನ ಕುರಿತು ರಾಜ್ಯ ಸರ್ಕಾರ ತನ್ನ ಬದ್ದತೆ ತೋರಬೇಕು ಎಂದು ಒತ್ತಾಯಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ ಮಾತನಾಡಿ ಇದು ಜಿಲ್ಲೆಯ 20 ಲಕ್ಷಕ್ಕು ಹೆಚ್ಚಿನ ಜನರ ಆರೋಗ್ಯದ ಪ್ರಶ್ನೆಯಾಗಿದ್ದು ಇದರಲ್ಲಿ ಯಾವುದೆ ಪಕ್ಷಗಳು ತಮ್ಮ ರಾಜಕೀಯವನ್ನು ಬದಿಗಿರಿಸಿ ಜಿಲ್ಲೆಯ ಪರವಾಗಿನ ರಾಜಕೀಯ ಇಚ್ಚಾಶಕ್ತಿ ತೋರಬೇಕು.ಇಲ್ಲದಿದ್ದಲ್ಲಿ ಜನವರಿಯಿಂದ ಒತ್ತುವರಿ ತೆರವಿಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ ಆರಂಭಿಸಲಾಗುವುದು.ಈಗಾಗಲೇ ಈ ಹೋರಾಟಕ್ಕೆ ಜಿಲ್ಲೆಯ 40ಕ್ಕು ಹೆಚ್ಚು ಸಂಘಟನೆಗಳು ಬೆಂಬಲ ತೋರಿದ್ದು.ಮೆಡಿಕಲ್ ಕಾಲೇಜು ಜಮೀನು ಒತ್ತುವರಿ ಮಾಡಿಕೊಂಡಿರುವ ತಮಿಳು ಕಾಲೋನಿ ಸೇರಿದಂತೆ ಎಲ್ಲರು ಜಿಲ್ಲೆಯ ಹಿತದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡುತ್ತೇವೆ ಎಂದು ಘೋಷಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಗೌಡ.ಕರುನಾಡ ಸೇವಕರು ಸಂಘಟನೆಯ ಎಸ್ ಕೆ ರಾಜೂಗೌಡ. ರಾಜ್ಯ ರೈತಸಂಘದ ಮಲ್ಲೀಗೆರೆ ಅಣ್ಣಯ್ಯ.ಆಟೋ ಚಾಲಕರ ಸಂಘದ ವೆಂಕಟೇಶ್.ಮುದ್ದೇಗೌಡ
ಕಸಾಪ ಮಾಜಿ ಅಧ್ಯಕ್ಷ ಪ್ರೋ ಜಿಟಿ ವೀರಪ್ಪ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!