Tuesday, September 16, 2025
spot_img

ಮಂಡ್ಯ:ಕರ್ತವ್ಯದಲ್ಲಿರುವಾಗಲೆ ಹೃದಯಾಘಾತದಿಂದ ನೀರುಗಂಟಿ ಸಾವು

ಹೃದಯಾಘಾತದಿಂದ ನೀರುಗಂಟಿ ಸಾವು

ಮಂಡ್ಯ:ಸೆ.೧೬. ನಗರದ ಜಲಮಂಡಳಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೀರುಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ ನವೀನ್(೩೯) ಎಂಬ ನೌಕರ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಂಡ್ಯ ನಗರ ಜಲಮಂಡಳಿಯಲ್ಲಿ ಕಳೆದ ೧೨ ವರ್ಷಗಳಿಂದ ಹೊರಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನವೀನ್ ಇಂದು ಮಧ್ಯಾಹ್ನ ವಿಶ್ವೇಶ್ವರಯ್ಯ ಕ್ರೀಡಾಂಗಣಾದ ಬಳಿ ಕರ್ತವ್ಯ ನಿರತನಾಗಿರುವಾಗಲೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾನೆ.ತಕ್ಷಣ ಉಳಿದ ನೌಕರರು ಜಿಲ್ಲಾಸ್ಪತ್ರೆಗೆ ಕೊಂಡೊಯ್ದರು ಯಾವುದೆ ಪ್ರಯೋಜನವಾಗಿಲ್ಲ.

ಮೃತರು ಪತ್ನೀ ಹಾಗೂ ಒರ್ವ ಪುತ್ರ ಪುತ್ರಿಯನ್ನು ಆಗಲಿದ್ದು ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.ನಾಳೆ (ಸೆ.೧೭) ನಗರದ ಹೊಸಹಳ್ಳಿಯ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ: ನೀರು ಗಂಟಿ ನವೀನ್ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮೃತರ ಕುಟುಂಬಕ್ಕೆ ಜಲಮಂಡಳಿಯಿಂದ ೨೫ ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಜಲಮಂಡಳಿಯಲ್ಲಿ ಉದ್ಯೋಗ ನೀಡುವಂತೆ ಆಗ್ರಹಿಸಿದ್ದಾರೆ.

ರಾಜ್ಯ ಸರಕಾರ ಯಾವುದೆ ತಾರತಮ್ಯ ಮಾಡದೆ ನೀರುಗಂಟಿಗಳಿಗೂ ಪೌರಕಾರ್ಮಿಕರ ಮಾದರಿಯಲ್ಲಿ ಆರೋಗ್ಯ ತಪಾಸಣೆ ಹಾಗೂ ನೇರಪಾವತಿ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!