![](https://halemysore.filmyscoop.in/wp-content/uploads/2023/06/IMG-20230604-WA0007-1024x461.jpg)
ನಾಗಮಂಗಲ:ಮುಂದೆ ಚಲಿಸುತ್ತಿದ್ದ ಡಸ್ಟ್ ತುಂಬಿದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ರವಿ ವಾರ ಬೆಳಿಗ್ಗೆ ನಡೆದಿದೆ.
![](https://halemysore.filmyscoop.in/wp-content/uploads/2023/06/IMG-20230604-WA0009-1024x485.jpg)
ಅಪಘಾತದಲ್ಲಿ ಶರತ್,ನವೀನ್, ಹೇಮಂತ್ ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ ಮತ್ತೋರ್ವನ ಮೃತನ ಹೆಸರು ಹಾಗೂ ಮೃತರ ವಿಳಾಸ ಖಚಿತವಾಗಿಲ್ಲ, ನೆಲಮಂಗಲ ಮತ್ತು ಮಾಗಡಿ ಮೂಲದವರು ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಿಂದ ಹಾಸನ ಕಡೆ ಹೋಗುತ್ತಿದ್ದಾಗ ರವಿವಾರ ಬೆಳಗಿನ ಜಾವ ಸರಿಸುಮಾರು 5 ಗಂಟೆ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುವ ತಿರುಮಲಾಪುರ ಗೇಟ್ ಬಳಿ ಘಟನೆ ನಡೆದಿದೆ.
![](https://halemysore.filmyscoop.in/wp-content/uploads/2023/06/IMG-20230604-WA0011-1024x485.jpg)
ಅಪಘಾತದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ನಾಲ್ವರು ಮೃತಪಟ್ಟಿದ್ದಾರೆ ಅಪಘಾತದ ರಭಸಕ್ಕೆ ಕಾರಿನ ಮುಂಭಾಗದ ಸಂಪೂರ್ಣ ಜಖಂಗೊಂಡಿದೆ.
ಘಟನಾ ಸ್ಥಳಕ್ಕೆ ನಾಗಮಂಗಲ ಡಿವೈಎಸ್ಪಿ. ಲಕ್ಷ್ಮಿ ಪ್ರಸಾದ್, ಸಿಪಿಐ ನಿರಂಜನ್ ಹಾಗೂ ಬೆಳ್ಳೂರು. ಪೋಲಿಸ್ ಠಾಣೆ ಪಿಐ ಲೋಕೇಶ್ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
![](https://halemysore.filmyscoop.in/wp-content/uploads/2023/06/IMG-20230604-WA0008-575x1024.jpg)