ಹಿಂದೂಗಳ ಹಾಗೂ ವಿಶೇಷವಾಗಿ ಶ್ರೀ ಹನುಮಂತ ಭಕ್ತರ ಜಾಗೃತಿಗಾಗಿ ಜನರಲ್ಲಿ ಭಕ್ತಿ ಮೂಡಿಸುವಂತೆ ಡಿಸೆಂಬರ್ 14ರಿಂದ ಮೂಡಲ ಬಾಗಿಲು ಹನುಮ ಮಾಲಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಸಂಚಾಲಕರಾದ ಚಂದನ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ಗ್ರಾಮದಲ್ಲಿ ಶ್ರೀ ಹನುಮಾನ್ ಚಾಲೀಸ್ ಅಭಿಯಾನದ ರಥಯಾತ್ರೆ ನಡೆಯುತ್ತಿದೆ ಹಾಗೂ ಶ್ರೀರಂಗಪಟ್ಟಣ ಪ್ರಮುಖ ಕೇಂದ್ರ ಬಿಂದುವಾದ ಎಲ್ಲ ಗ್ರಾಮಗಳಲ್ಲೂ ರಥಯಾತ್ರೆ ನಡೆಯುತ್ತದೆ.
ಜನರಲ್ಲಿ ಹನುಮ ಭಕ್ತರ ಜಾಗೃತಿ ಹಾಗೂ ಭಕ್ತಿ ಭಾವನೆಗಳನ್ನು ಹೆಚ್ಚಿಸುವಂತೆ ಯುವಜನರಲ್ಲಿ ಅರಿವು ಮೂಡಿಸುವಂತೆ ಮಾಡಲಾಗುವುದು ಎಂದು ಹೇಳಿದರು.
ಸತೀಶ್, ರವಿ, ಅಶೋಕ್, ಸೃಜನ್ ಭಾಗವಹಿಸಿದ್ದರು.


